ಚಿಕಿತ್ಸೆ ನೀಡುವುದು ವಿಳಂಬ ಆದಷ್ಟೂ ಸಾವಿನ ಪ್ರಮಾಣ ಹೆಚ್ಚಾಗುತ್ತದೆ. ಗ್ರಾಮೀಣ ಪ್ರದೇಶ, ಪಟ್ಟಣ ಮತ್ತು ಸಣ್ಣ ನಗರಗಳ ಆರೋಗ್ಯ ಕೇಂದ್ರಗಳಲ್ಲಿ ಇಸಿಜಿ ವ್ಯವಸ್ಥೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ವೈದ್ಯರ ನೆರವಿಲ್ಲದೆ ಯಾರು ಬೇಕಾದರೂ ಕಾರ್ಡಿಯೋಸ್ಕ್ರೀನ್ ಬಳಸಿ ಹೃದಯಾಘಾತವನ್ನು ಖಚಿತಪಡಿಸಿಕೊಳ್ಳಬಹುದು ಎಂದು ಮಂಜುನಾಥ್ ತಿಳಿಸಿದರು.