ಪ್ರಕರಣ ಹಿನ್ನೆಲೆ: ಹೊನಸಿಗೆರೆ ಸಭೆಯಲ್ಲಿ ಸುರೇಶ್ ಗೌಡ ಅವರು ಜೆಡಿಎಸ್ನವರು ಬಂದರೆ ಉರೊಳಗಡೆ ಬಿಡಬೇಡಿ. ಶಾಸಕ ಗೌರಿಶಂಕರ್ ಬಂದರೆ ಕೆರೆಗೆ ನೀರು ಬಿಡಿಸದ ಶಾಸಕ, ಕಳ್ಳ ಕಳ್ಳ ಎಂದು ಕಿರುಚಿ. ದೊಣ್ಣೆ ಹಿಡಿದು ನಿಂತ್ಕೊಂಡು ಎಲೆಕ್ಷನ್ ಮಾಡಿ. ಕುರುಕ್ಷೇತ್ರದಲ್ಲಿ ಪಾಂಡವರೊಂದಿಗೆ ಶ್ರೀಕೃಷ್ಣ ಪರಮಾತ್ಮ ಇದ್ದ ಹಾಗೆ ನಾನು ನಿಮ್ಮ ಹಿಂದೆ ಇರ್ತೇನೆ ಎಂದು ಹೇಳಿದ್ದರು.