ಶ್ರೀವಿದ್ಯಾ ನಾಯರ್ ಎಂಬುವವರು, 2014ರಲ್ಲಿ ‘ಹೊಯಸಾಫ್ಟ್’ ಸಂಸ್ಥೆ ಮೂಲಕ ಕೆಎಸ್ಒಯುನಲ್ಲಿ ಬಿಬಿಎಂ ಕೋರ್ಸ್ಗೆ ನೋಂದಣಿ ಮಾಡಿಸಿದ್ದರು. 1ರಿಂದ 4 ಸೆಮಿಸ್ಟರ್ವರೆಗೆ ಪರೀಕ್ಷೆ ಬರೆದ ನಂತರ ಕೆಎಸ್ಒಯು ಮಾನ್ಯತೆ ರದ್ದಾಗಿತ್ತು. ಇದರಿಂದಾಗಿ, ಅವರಿಗೆ ಈ ಸೆಮಿಸ್ಟರ್ಗಳ ಅಂಕಪಟ್ಟಿ ಬಂದಿರಲಿಲ್ಲ ಹಾಗೂ ಪರೀಕ್ಷಾ ಶುಲ್ಕ ಕಟ್ಟಿದ್ದರೂ ಮುಂದಿನ ಸೆಮಿಸ್ಟರ್ಗಳ ಪರೀಕ್ಷೆಗೆ ಅವಕಾಶ ಸಿಕ್ಕಿರಲಿಲ್ಲ.