ನದಿ ಹರಿಯುವ 500 ಮೀಟರ್ ವ್ಯಾಪ್ತಿಯಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶವಿಲ್ಲ. ಆದರೆ, ಬಹುತೇಕ ಹೋಂಸ್ಟೇ, ರೆಸಾರ್ಟ್ಗಳು ಇರುವುದೇ ನದಿ ತಟದಲ್ಲಿ. ಇವುಗಳ ತ್ಯಾಜ್ಯ ಪ್ರತಿನಿತ್ಯ ನದಿಯ ಒಡಲು ಸೇರುತ್ತಿವೆ. ಜತೆಗೆ, ನದಿ ತಟದ ಪಟ್ಟಣ ಹಾಗೂ ಗ್ರಾಮಗಳ ತ್ಯಾಜ್ಯ, ಕಲುಷಿತ ನೀರೂ ನದಿ ಪಾಲಾಗುತ್ತಿದೆ. ಸಿದ್ದಾಪುರ ಭಾಗದಲ್ಲಿ ವ್ಯಾಪಾರಸ್ಥರು ಮೀನಿನ ತ್ಯಾಜ್ಯವನ್ನು ನದಿಗೆ ಎಸೆಯುವ ಮೂಲಕ ಕಂಟಕವಾಗುತ್ತಿದ್ದಾರೆ.