ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21ರಿಂದ ಕಾವೇರಿ ನದಿ ಜಾಗೃತಿ ಯಾತ್ರೆ

ಭಾಗಮಂಡಲದ ಸಂಗಮದಲ್ಲಿ ಮಹಾ ಆರತಿ
Last Updated 12 ಅಕ್ಟೋಬರ್ 2019, 12:16 IST
ಅಕ್ಷರ ಗಾತ್ರ

ಮಡಿಕೇರಿ: ಅಖಿಲ ಭಾರತೀಯ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಛತಾಆಂದೋಲನ ಸಮಿತಿ ಸಹಯೋಗದಲ್ಲಿ 9ನೇ ವರ್ಷದ ಕಾವೇರಿ ನದಿ ಜಾಗೃತಿ ಯಾತ್ರೆಯನ್ನು ಅ.21ರಿಂದ ನ. 8ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಆಂದೋಲನ ಸಮಿತಿ ಸಂಚಾಲಕಎಂ.ಎನ್‌.ಚಂದ್ರಮೋಹನ್‌ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, 21ರಂದು ತಲಕಾವೇರಿ ಕ್ಷೇತ್ರದಲ್ಲಿ ಬೆಳಿಗ್ಗೆ 8.30ಕ್ಕೆ ಪೂಜಾ ಕಾರ್ಯಕ್ರಮ ನಡೆಯಲಿದೆ. 9ಕ್ಕೆ ಯಾತ್ರೆಗೆ ಚಾಲನೆ ಸಿಗಲಿದೆ. ಬೆಳಿಗ್ಗೆ 10.30ಕ್ಕೆ ಭಾಗಮಂಡಲ ನದಿ ಸಂಗಮದಲ್ಲಿ ಮಹಾಆರತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಯಾತ್ರೆಗೆ ನದಿ ಜಾಗೃತಿಯಾತ್ರೆ ಸಮಿತಿ ಸಂಯೋಜಕ ಶ್ರೀರಂಗಪಟ್ಟಣಶಾಶ್ವತಿ ಧಾರ್ಮಿಕ ಕ್ರಿಯಾ ಕೇಂದ್ರದ ಡಾ.ಭಾನು ಪ್ರಕಾಶ್ ಶರ್ಮ, ಅಖಿಲ ಭಾರತ ಸನ್ಯಾಸಿ ಸಂಘದರಮಾನಂದ ಸ್ವಾಮೀಜಿ, ಶ್ರೀರಂಗಪಟ್ಟಣದ ಗಣೇಶ್ ಸ್ವರೂಪನಂದಾ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ನ.8ರಂದು ತಮಿಳುನಾಡಿನ ಪೊಂಪ್‌ಹಾರ್‌ನಲ್ಲಿ ತೀರ್ಥ ವಿಸರ್ಜನೆ ಮಾಡುವುದರೊಂದಿಗೆ ಆಂದೋಲನ ಸಮಾರೋಪಗೊಳ್ಳಲಿದೆ ಎಂದು ತಿಳಿಸಿದರು.

ಕಾವೇರಿ ರಿವರ್ ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮಂಡೇಪಂಡ ಬೋಸ್ ಮೋಣಪ್ಪ ಮಾತನಾಡಿ, 21ರಂದು ಬೆಳಿಗ್ಗೆ 8.30ಕ್ಕೆ ಭಾಗಮಂಡಲದಿಂದ ಹೊರಡುವ ರಥಯಾತ್ರೆ ಭಾಗಮಂಡಲ–ಬಲಮುರಿ–ಮೂರ್ನಾಡು– ಕಾವಡಿ, ಅಮ್ಮತ್ತಿ–ಸಿದ್ದಾಪುರ–ಮಾರ್ಗವಾಗಿ ನೆಲ್ಲಿಹುದಿಕೇರಿ ಸಾಗಲಿದೆ. ನಂತರ, ದುಬಾರೆ ಮಾರ್ಗವಾಗಿ ಕುಶಾಲನಗರಕ್ಕೆ ಆಗಮಿಸಿ ಅಂದು ಸಂಜೆ 5.30ಕ್ಕೆ ನದಿಗೆ ಮಹಾ ಆರತಿ ನಡೆಯಲಿದ್ದು, ರಾತ್ರಿ ಕಣಿವೆ ರಾಮಲಿಂಗೇಶ್ವರ ದೇವಾಲಯದಲ್ಲಿ ವಾಸ್ತವ್ಯ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

22ರಂದು ಕಣಿವೆ ಮಾರ್ಗವಾಗಿ ಹೆಬ್ಬಾಲೆ, ಶಿರಂಗಾಲ, ಕೊಣನೂರು ಮಾರ್ಗವಾಗಿ ಸಾಗಿ ರಾಮನಾಥಪುರದಲ್ಲಿ ಕಾವೇರಿಗೆ ಮಹಾ ಆರತಿ ನಡೆಯಲಿದೆ ಎಂದು ವಿವರಿಸಿದರು.

ನಂತರ ಕೆ.ಆರ್‌. ನಗರ ಮಾರ್ಗವಾಗಿ ಬೆಳಗೊಳ ಮೂಲಕ ಶ್ರೀರಂಗಪಟ್ಟಣದಗಂಜಾಂನ ನಿಮಿಷಾಂಬ ದೇವಾಲಯದಲ್ಲಿ ಮಹಾ ಆರತಿ, ಕನಕಪುರ ರವಿಶಂಕರ ಗುರೂಜಿ ಆರ್ಟ್‌ ಆಫ್‌ ಲಿವಿಂಗ್ ಆಶ್ರಮದಲ್ಲಿ ವಾಸ್ತವ್ಯ, 23ರಂದು ಬೆಳಿಗ್ಗೆ ರಥಯಾತ್ರೆ ಹೊಸೂರು–ಹೊಗೇನಕಲ್ ಮೂಲಕ ತಮಿಳುನಾಡಿಗೆ ತಲುಪಲಿದೆ ಎಂದು ತಿಳಿಸಿದರು.

‌‌‌ಪತ್ರಿಕಾಗೋಷ್ಟಿಯಲ್ಲಿ ನದಿ ಜಾಗೃತಿ ಸಮಿತಿ ಅಧ್ಯಕ್ಷ ಡಿ.ಆರ್‌.ಸೋಮಶೇಖರ್‌, ಟ್ರಸ್ಟಿ ಕೆ.ಆರ್.ಶಿವನಂದನ್‌, ಪನ್ಯಾಡಿ ಅಕ್ಷಯ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT