ಕಾವೇರಿ ರಿವರ್ ಸೇವಾ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಮಂಡೇಪಂಡ ಬೋಸ್ ಮೋಣಪ್ಪ ಮಾತನಾಡಿ, 21ರಂದು ಬೆಳಿಗ್ಗೆ 8.30ಕ್ಕೆ ಭಾಗಮಂಡಲದಿಂದ ಹೊರಡುವ ರಥಯಾತ್ರೆ ಭಾಗಮಂಡಲ–ಬಲಮುರಿ–ಮೂರ್ನಾಡು– ಕಾವಡಿ, ಅಮ್ಮತ್ತಿ–ಸಿದ್ದಾಪುರ–ಮಾರ್ಗವಾಗಿ ನೆಲ್ಲಿಹುದಿಕೇರಿ ಸಾಗಲಿದೆ. ನಂತರ, ದುಬಾರೆ ಮಾರ್ಗವಾಗಿ ಕುಶಾಲನಗರಕ್ಕೆ ಆಗಮಿಸಿ ಅಂದು ಸಂಜೆ 5.30ಕ್ಕೆ ನದಿಗೆ ಮಹಾ ಆರತಿ ನಡೆಯಲಿದ್ದು, ರಾತ್ರಿ ಕಣಿವೆ ರಾಮಲಿಂಗೇಶ್ವರ ದೇವಾಲಯದಲ್ಲಿ ವಾಸ್ತವ್ಯ ಮಾಡಲಾಗುವುದು ಎಂದು ಮಾಹಿತಿ ನೀಡಿದರು.