ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯ್ತಿಯ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ್ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆಶುಕ್ರವಾರ ವಹಿಸಲಾಗಿದೆ.
2016ರ ಜೂನ್ 15ರಂದು ಈ ಕೊಲೆ ನಡೆದಿತ್ತು.ಕೊಲೆ ನಡೆದ 48 ಗಂಟೆಗಳಲ್ಲಿ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ‘ಇದೊಂದು ರಾಜಕೀಯ ಪ್ರೇರಿತ ಕೊಲೆ’ ಎಂದು ಆರೋಪಿಸಿದ್ದ ಗೌಡರ ಕುಟುಂಬದವರು, ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ವಿರುದ್ಧವೂ ಆರೋಪ ಮಾಡಿದ್ದರು.