ಪ್ರಕರಣದಲ್ಲಿ ಈಗಾಗಲೇ ಬೆಳಗಾವಿ ಪ್ಯಾಂಥರ್ಸ್ ತಂಡದ ನಾಯಕ ಅಲಿ ಅಶ್ಫಾಕ್ ತಾರ್, ಬಳ್ಳಾರಿ ಟಸ್ಕರ್ಸ್ ತಂಡದ ಭವೇಶ್, ನಾಯಕ ಸಿ.ಎಂ. ಗೌತಮ್, ಆಟಗಾರ ಅಬ್ರಾರ್ ಖಾಜಿ, ಬೆಂಗಳೂರು ಬ್ಲ್ಯಾಸ್ಟರ್ಸ್ ತಂಡದ ಬೌಲಿಂಗ್ ಕೋಚ್ ವಿನು ಪ್ರಸಾದ್, ಬ್ಯಾಟ್ಸ್ಮನ್ಗಳಾದ ವಿಶ್ವನಾಥನ್ ಮತ್ತು ನಿಶಾಂತ್ ಶೆಖಾವತ್, ಬುಕ್ಕಿ ಸಯ್ಯಾಂ ಅವರನ್ನು ಸಿಸಿಬಿ ಬಂಧಿಸಿದೆ. ತಲೆ ಮರೆಸಿಕೊಂಡಿರುವ ಬುಕ್ಕಿ ಜತಿನ್ ಬಂಧನಕ್ಕೆ ಲುಕ್ಔಟ್ ನೋಟಿಸ್ ಹೊರಡಿಸಲಾಗಿದೆ. ಆರೋಪಿಗಳು ನೀಡಿರುವ ಮಹತ್ವದ ಸುಳಿವುಗಳನ್ನು ಆಧರಿಸಿ ತನಿಖೆ
ನಡೆಸಲಾಗುತ್ತಿದೆ.