‘ಗುಣಮಟ್ಟದ ಪ್ರಸಾದ ವಿತರಣೆಗೆ ದೇಶದಾದ್ಯಂತ ಯಾವುದೇ ಮಾನದಂಡ ನಿಗದಿಪಡಿಸಿಲ್ಲ. ಈ ಕುರಿತು ನಿಯಂತ್ರಣಾ ವಿಧಾನಗಳನ್ನೂ ಪಾಲಿಸುತ್ತಿಲ್ಲ. ಹೀಗಾಗಿ, ದೇಶದ ಪ್ರಮುಖ ದೇವಸ್ಥಾನಗಳಲ್ಲಿ ಪ್ರಸಾದಕ್ಕಾಗಿ ಬಳಸುವ ಪದಾರ್ಥಗಳ ನಿರ್ವಹಣೆ, ತಿನಿಸುಗಳ ತಯಾರಿಕೆ, ಯಾಂತ್ರೀಕರಣಕ್ಕೆ ಆದ್ಯತೆ ನೀಡುವ ಸಲುವಾಗಿ ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸಲಾಗಿತ್ತು’ ಎಂದು ಸಿಎಫ್ಟಿಆರ್ಐ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದವು.