ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಲೆಯ ಮಕ್ಕಳ ಮಾತಾಯಿ’ ನಿಧನ

Last Updated 18 ಜೂನ್ 2019, 17:53 IST
ಅಕ್ಷರ ಗಾತ್ರ

ಯಳಂದೂರು (ಚಾಮರಾಜನಗರ ಜಿಲ್ಲೆ): ‘ಮಲೆಯ ಮಕ್ಕಳ ಮಾತಾಯಿ‌‘ ಎಂದೇ ಹೆಸರಾಗಿದ್ದ, ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಜಡೇ ಜಲ್ಲೆ ಮಾದಮ್ಮ (60) ಮಂಗಳವಾರ ನಿಧನರಾದರು. ಅವರಿಗೆ ಪುತ್ರ, ಪುತ್ರಿ ಇದ್ದಾರೆ.

ಯರಕನಗದ್ದೆ ಪೋಡಿಯಲ್ಲಿ ಜನಿಸಿದ್ದ ಅವರನ್ನು ಸ್ಥಳೀಯರು ‘ಜಡ್ಡೆಮಡಿ‘ ಎಂದು ಕರೆಯುತ್ತಿದ್ದರು. ತಮ್ಮ ತಾಯಿಯ ಮಾರ್ಗದರ್ಶನದಲ್ಲಿ, ಪಾರಂಪರಿಕ ಆರೋಗ್ಯ ಸೇವೆಯನ್ನು ಕಲಿತು ಜನಪ್ರಿಯರಾಗಿದ್ದರು. ಸೂಲಗಿತ್ತಿಯಾದರೂ ಅರಣ್ಯ, ಔಷಧೀಯ ಸಸ್ಯಗಳ ಬಗ್ಗೆ ಅವರಿಗೆ ಮಾಹಿತಿ ಇತ್ತು.

ಸೋಲಿಗರ ಆರೋಗ್ಯಕ್ಕೆ ದುಡಿದಿದ್ದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಜಲ್ಲೇ ಸಿದ್ದಮ್ಮ ಅವರ ಪುತ್ರಿಯಾದ ಮಾದಮ್ಮ, ಗುಡ್ಡಗಾಡಿನ ಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಹೆರಿಗೆ ಮಾಡಿಸಿದ್ದರು. ಆಸ್ಪತ್ರೆಗೆ ತೆರಳದ ಸೋಲಿಗ ಮಹಿಳೆಯರಿಗೆ ಕುಳಿತ ಸ್ಥಿತಿಯಲ್ಲಿಯೇ ಹೆರಿಗೆ ಮಾಡಿಸುವಲ್ಲಿ ನಿಷ್ಣಾತರಾಗಿದ್ದರು.

ಬಿಳಿಗಿರಿರಂಗನಬೆಟ್ಟದ ಮೊದಲ ಮಾವು ದಿಂಬದ ಬಳಿ ಬುಧವಾರ ಮಧ್ಯಾಹ್ನ 12ಕ್ಕೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT