ಮೀಸಲು ಕ್ಷೇತ್ರವಾದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್– ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳು ವ್ಯಾಪ್ತಿಗೆ ಬರುತ್ತವೆ. ಜೆಡಿಎಸ್– ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೂ, ಇಲ್ಲಿ ಕಾಂಗ್ರೆಸ್ ಕಣಕ್ಕಿಳಿಯಲಿದೆ.ಎರಡು ಬಾರಿ ಗೆದ್ದಿರುವ ಕಾಂಗ್ರೆಸ್ನ ಆರ್.ಧ್ರುವನಾರಾಯಣ ಈ ಬಾರಿಯೂ ಸ್ಪರ್ಧಿಸಲಿದ್ದಾರೆ.ಬಿಎಸ್ಪಿ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಹೇಳಿದೆ.
ಬಿಜೆಪಿಯಲ್ಲಿ 10ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದಾರೆ. ಧ್ರುವನಾರಾಯಣ ಅವರನ್ನು ಸೋಲಿಸಬೇಕಾದರೆ, ಶ್ರೀನಿವಾಸ ಪ್ರಸಾದ್ ಅವರೇ ಅಭ್ಯರ್ಥಿಯಾಗಬೇಕು ಎಂಬ ನಿಲುವು ಪಕ್ಷದ ಸ್ಥಳೀಯ ನಾಯಕತ್ವದಲ್ಲಿದೆ.
*******
ಆಕಾಂಕ್ಷಿಗಳು
ಕಾಂಗ್ರೆಸ್: ಆರ್.ಧ್ರುವನಾರಾಯಣ
ಬಿಜೆಪಿ: ಕೆ.ಶಿವರಾಂ, ಕೋಟೆ ಶಿವಣ್ಣ, ಜಿ.ಎನ್.ನಂಜುಂಡಸ್ವಾಮಿ, ಕಾಗಲವಾಡಿ ಶಿವಣ್ಣ, ಎಸ್.ಮಹದೇವಯ್ಯ, ಭಾರತಿ ಶಂಕರ್, ಆರ್.ರಾಜು, ಅರುಣ್ ಕುಮಾರ್, ಸಿ.ರಮೇಶ್, ಡಾ.ಮೋಹನ್
ಮತದಾರರ ಸಂಖ್ಯೆ ;16,67,044
ವಿಧಾನಸಭಾ ಕ್ಷೇತ್ರವಾರು ಬಲಾಬಲ
ಒಟ್ಟು– 8
ಕಾಂಗ್ರೆಸ್ 4: ಚಾಮರಾಜನಗರ, ಹನೂರು, ವರುಣಾ, ಎಚ್.ಡಿ.ಕೋಟೆ