ಈ ಕುರಿತು'ಪ್ರಜಾವಾಣಿ'ಗೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ರಮೇಶಬಾಬು, '47 ಮಂದಿಗೆ ಈಗಾಗಲೇ ಹೊಸದಾಗಿ ನಿರ್ಮಿಸಲಾಗುತ್ತಿರುವ ಅಂಗಡಿ ಮಳಿಗೆಗಳ ಹಕ್ಕುಪತ್ರವನ್ನು ನೀಡಲಾಗಿದೆ. ಇನ್ನುಳಿದವರಿಗೂ ದಸರೆ ಮುಗಿದ ನಂತರ ನೀಡಲಾಗುವುದು. ರಾತ್ರಿಯೆ ಅಂಗಡಿ ಮಾಲೀಕರಿಗೆ ತೆರವು ಸಂಬಂಧ ಸೂಚನೆ ನೀಡಲಾಗಿತ್ತು. ಅಂಗಡಿಯಲ್ಲಿದ್ದ ಪರಿಕರಗಳನ್ನು ವ್ಯಾಪಾರಸ್ಥರು ನಸುಕಿನ ಹೊತ್ತಿಗೆ ಖಾಲಿ ಮಾಡಿದ್ದರು. ಸದ್ಯ ಖಾಲಿ ಅಂಗಡಿಗಳನ್ನಷ್ಟೆ ತೆರವು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.