‘ಶಾಹೂನಗರ, ಅಜಂ ನಗರ, ನೆಹರು ನಗರ ಮತ್ತು ವೈಭವ ನಗರಗಳಲ್ಲಿ ಈ ಜನರು ವಾಸವಾಗಿದ್ದಾರೆ. ಹಲವು ದಿನಗಳಿಂದ ಕೆಲಸವಿಲ್ಲದೆ ಗಳಿಕೆ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ನನ್ನನ್ನು ಮೂರ್ನಾಲ್ಕು ದಿನಗಳಿಂದ ಸಂಪರ್ಕಿಸಿದ ಆ ಕುಟುಂಬಗಳಿಗೆ ಅಕ್ಕಿ, ತೊಗರಿ ಬೇಳೆ, ಅಡುಗೆ ಎಣ್ಣೆ, ಬಟ್ಟೆ ತೊಳೆಯುವ ಸಾಬೂನು, ಸ್ನಾನದ ಸಾಬೂನು, ಸಾಸಿವೆ, ಜೀರಿಗೆ ಕೊಟ್ಟಿದ್ದೇನೆ. ಅವರ ಪ್ರಕಾರ 15 ದಿನಗಳವರೆಗೆ ಸಾಕಾಗಬಹುದು’ ಎನ್ನುತ್ತಾರೆ ಅವರು.