ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ಮಾರ್ಗವನ್ನು ಕೆಎಸ್ಆರ್ಟಿಸಿ ಮಿನಿ ಬಸ್ಸುಗಳು ಮತ್ತು ಲಘು ವಾಹನ ಸಂಚಾರಕ್ಕೆ ಇದೇ 25ರಿಂದ ಮುಕ್ತಗೊಳಿಸಲಾಗಿದೆ.
ಕಾರು, ಜೀಪು, ಟೆಂಪೊ, ವ್ಯಾನು, ಎಲ್ಸಿವಿ (ಮಿನಿವ್ಯಾನ್), ದ್ವಿಚಕ್ರ ವಾಹನ, ಆಂಬುಲೆನ್ಸ್, ಲಘು ವಾಹನಗಳ ಓಡಾಟಕ್ಕೆ ಅನುವು ಮಾಡ ಲಾಗಿದೆ. ‘ಘಾಟಿ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರ ನಿರ್ಬಂಧ ಮುಂದುವರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶದಲ್ಲಿ ತಿಳಿಸಿದ್ದಾರೆ.