‘ಜೆಡಿಎಸ್ ತೊರೆಯಲು ಜಿ.ಟಿ.ದೇವೇಗೌಡ, ಶ್ರೀನಿವಾಸ್ ಸೇರಿ ಹಲವು ಶಾಸಕರು ತಯಾರಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಜೆಡಿಎಸ್ ನಾಯಕರ ವರ್ತನೆಗೆ ಬೇಸತ್ತು ನಾವೂ ಆ ಪಕ್ಷ ಬಿಟ್ಟೆವು. ಪಕ್ಷ ಬಿಟ್ಟವರದೇ ತಪ್ಪು, ತಾವು ಮಾತ್ರ ಸಂಭಾವಿತರು ಎಂಬಂತೆ ನಡೆದುಕೊಳ್ಳುತ್ತಾರೆ. ಇದನ್ನು ಜನಗಮನಿಸುತ್ತಿದ್ದಾರೆ. ಅವರೇ ಉತ್ತರ ಕೊಡುತ್ತಾರೆ’ ಎಂದು ಅವರು ತಿಳಿಸಿದರು.