ಇಷ್ಟಕ್ಕೇ ಬ್ಯಾಂಕ್ನ ಕನ್ನಡ ವಿರೋಧಿ ಧೋರಣೆ ನಿಂತಿಲ್ಲ. ಕಳೆದ ಸೆ.9ರಂದು ಇದೇ ಮಂಡಿಯವರು ಕನ್ನಡದಲ್ಲಿ ಬರೆದ ಮತ್ತೊಂದು ಚೆಕ್ ಅನ್ನು ಬೆಳೆಗಾರರಿಗೆ ನೀಡಿದ್ದು, ಅದು ಕೂಡ ಮರಳಿ ಬಂದಿದೆ. ಚೆನ್ನೈನಲ್ಲಿರುವ ಸೆಂಟ್ರಲೈಸ್ಡ್ ಚೆಕ್ ಪ್ರಾಸೆಸಿಂಗ್ ಸೆಂಟರ್ (ಸಿಪಿಸಿಸಿ) ನಿಂದ ಸಿದ್ದಿವಿನಾಯಕ ಮಂಡಿಯ ಪಾಲುದಾರರಲ್ಲಿ ಒಬ್ಬರಾಗಿರುವ ಮಾಧವ ಚಿಪ್ಳಿಯವರಿಗೆ ಫೋನ್ ಮೂಲಕ ಅಧಿಕಾರಿಯೊಬ್ಬರು, ‘₹ 1 ಲಕ್ಷ ಮೊತ್ತದ ಚೆಕ್ ಅನ್ನು ಕೊಟ್ಟಿದ್ದು ನೀವೇನಾ?’ ಎಂದು ವಿಚಾರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಮಾಧವ ಅವರು, ‘ನೀವು ಬ್ಯಾಂಕ್ ಅಧಿಕಾರಿ ಎಂದು ನಂಬುವುದು ಹೇಗೆ’ ಎಂದು ಪ್ರಶ್ನಿಸಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡು ನಾವು ವಿಚಾರಿಸಿದಾಗ, ‘ಸರಿಯಾದ ಮಾಹಿತಿ ನೀಡಲಿಲ್ಲ ಎಂಬ ಸಬೂಬು ಹೇಳಿ ಚೆಕ್ ಅನ್ನು ಹಿಂದಿರುಗಿಸಿದ್ದಾರೆ.