ಸೋಮವಾರ ನಡೆದ ಮಕ್ಕಳ ದಸರಾ ಕಾರ್ಯಕ್ರಮಕ್ಕೆ ಬಾಲ ಸಂಗೀತ ಪ್ರತಿಭೆಗಳಾದ ಗದಗ ಜಿಲ್ಲೆಯ ಅಂಧ ಬಾಲಕಿ ಸಂಗೀತಾ, ಹಾವೇರಿ ಜಿಲ್ಲೆಯ ರುಬೀನಾ ಹಾಗೂ ಮೈಸೂರಿನ ನಯನ ನಾಗರಾಜ್ ವಿಶೇಷ ಆಹ್ವಾನಿತರಾಗಿದ್ದರು. ಅವರನ್ನು ಸನ್ಮಾನಿಸುವ ವೇಳೆ, ತಟ್ಟೆಯಲ್ಲಿ ಸ್ಮರಣಿಕೆಗಳಷ್ಟೇ ಇದ್ದವು. ಚೆಕ್ ಕಾಣಲಿಲ್ಲ. ಈ ಬಗ್ಗೆ ಡಿಡಿಪಿಐ ಡಾ.ಪಾಂಡುರಂಗ ಅವರಲ್ಲಿ ಪ್ರಶ್ನಿಸಿದ ಸಚಿವರು, ಅವರ ಉತ್ತರದಿಂದ ಸಮಾಧಾನಗೊಳ್ಳಲಿಲ್ಲ.