ದಾವಣಗೆರೆ: ಕಳೆದ ವರ್ಷ ಅತ್ತ ಕೊಡಗು ಜಿಲ್ಲೆಯಲ್ಲಿ ಮಹಾ ಮಳೆಯಲ್ಲಿ ಜನರ ಬದುಕು ಮುಳುಗುತ್ತಿದ್ದರೆ, ಇತ್ತ ಅದನ್ನು ಟಿವಿಯಲ್ಲಿ ನೋಡಿದ ನಗರದ ಶಾಲಾ ಬಾಲಕನ ಹೃದಯ ಮಿಡಿಯುತ್ತಿತ್ತು. ಸಂತ್ರಸ್ತರಿಗೆ ತಾನೂ ‘ಆಸರೆ’ಯಾಗಬೇಕು ಎಂಬ ಅಪರೂಪದ ಕಾಳಜಿ ಅವನಲ್ಲಿ ಮೂಡಿತು. ಸಂತ್ರಸ್ತರ ನೋವಿಗೆ ಕಣ್ಣೀರಿಟ್ಟಿದ್ದ ಅವನು, ಜನರಿಂದ ₹ 25,400 ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಿಕೊಟ್ಟ ಬಳಿಕ ಹರ್ಷಗೊಂಡಿದ್ದ.