‘ಪ್ರಾರ್ಥನಾ ಮೂರನೇ ತರಗತಿಯಲ್ಲಿರುವಾಗಿನಿಂದ ಈ ಕಾಯಕವನ್ನು ತಪಸ್ಸಿನಂತೆ ಮಾಡುತ್ತಿದ್ದ ನಿರಂಜನ, ಆಕೆಯ ಕೊನೆಯ ದಿನಗಳವರೆಗೂ ಇದನ್ನು ಮುಂದುವರಿಸಿದ. ಕೆಲ ತಿಂಗಳುಗಳ ಹಿಂದೆ ಆಕೆ ಅಸುನೀಗಿದಳು. ಅದಕ್ಕೂ ಮುನ್ನ ಆಕೆ, ಅಮ್ಮನ ಬಳಿ ನಿರಂಜನನಿಗೆ ಅಂಗಿ ಹೊಲಿಸಿಕೊಡುವಂತೆ ಕೋರಿಕೊಂಡಿದ್ದಳಂತೆ. ನಾಲ್ಕೈದು ದಿನ ಊಟ, ತಿಂಡಿ ಬಿಟ್ಟು ಕುಳಿತಿದ್ದ ನಿರಂಜನನಿಗೆ ಈಗಲೂ ಪ್ರಾರ್ಥನಾ ನೆನಪು ಮಾತ್ರ ಹಸಿರಾಗಿದೆ’ ಎನ್ನುತ್ತಾರೆ ಶಿಕ್ಷಕ ಮಾರುತಿ ಉಪ್ಪಾರ್.