ಲಾಕ್ಡೌನ್ ವೇಳೆ ಸಿಗರೇಟ್ ಮಾರಾಟ ನಿಷೇಧವಿದ್ದರೂ ಸಂತೋಷ್ ಅಂಗಡಿಯಲ್ಲಿ ಮಾರುತ್ತಿದ್ದಾಗ ಇನ್ಸ್ಪೆಕ್ಟರ್ಗಳ ಕೈಗೆ ಸಿಕ್ಕಿಬಿದ್ದರು. ಅವರ ಬಳಿ ₹ 23 ಲಕ್ಷ ಮೌಲ್ಯದಷ್ಟು ಸರಕಿತ್ತು. ಲಂಚ ಕೊಡದಿದ್ದರೆ ಕೇಸ್ ಹಾಕಿ ಜೈಲಿಗಟ್ಟುವುದಾಗಿ ಅಧಿಕಾರಿಗಳು ಬೆದರಿಸಿದರು. ಹಣವಿಲ್ಲದ ವ್ಯಾಪಾರಿ, ತನ್ನ ಸೋದರನ ಪತ್ನಿಯ ಒಡವೆ ಅಡಮಾನ ಇಡಲು ಹೋಗಿದ್ದರು. ಅದರಿಂದ ಹೆಚ್ಚು ಸಿಗುವುದಿಲ್ಲ ಎಂದು ಗೊತ್ತಾದಾಗ ಅಧಿಕಾರಿಗಳು ಅದನ್ನು ₹ 15 ಲಕ್ಷಕ್ಕೆ ಮಾರಿಸಿ ಹಣ ಕಿತ್ತುಕೊಂಡರು ಎಂದು ಮೂಲಗಳು ವಿವರಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಲು ಅಜಯ್ ನಿರಾಕರಿಸಿದರು.