80-90 ವರ್ಷಗಳಿಂದ ರೈತರು ಉಳುತ್ತಿದ್ದಾರೆ. ಮಹಾರಾಜರ ಕಾಲದಿಂದಲೂ ಈ ಭೂಮಿ ಕಂದಾಯ ಇಲಾಖೆ ವ್ಯಾಪ್ತಿಯಲ್ಲೆ ಇದೆ. ಅರಣ್ಯ ಇಲಾಖೆ 1907ಕ್ಕೆ ಹೊರಡಿಸಿದ ಅಧಿಸೂಚನೆ ಹೊರತುಪಡಿಸಿ ಬೇರೆ ಯಾವ ಆಧಾರವೂ ಅರಣ್ಯ ಇಲಾಖೆಗಿಲ್ಲ. ರೈತರಿಗೆ ಅನುಕೂಲ ಮಾಡಿಕೊಡಲು ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ ಸ್ಪಂದಿಸಿದ್ದು, ಸೋಮವಾರ ಪುನಃ ಭೇಟಿಯಾಗುವಂತೆ ತಿಳಿಸಿದ್ದಾರೆ. ಅವರ ಮಾತಿನ ಧಾಟಿ ನೋಡಿದರೆ ಖಂಡಿತ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದು ಲೀಲಾವತಿ ಹಾಗೂ ವಿನೋದ್ ರಾಜ್ ತಿಳಿಸಿದರು.