ಯಾವ ಭಾಗದಲ್ಲಿ ಪ್ರವಾಹ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಿದೆ, ಪರಿಹಾರ ಕೇಂದ್ರಗಳಲ್ಲಿ ಎಷ್ಟು ಜನರು ಇನ್ನೂ ಇದ್ದಾರೆ, ಎಷ್ಟು ಮಂದಿ ಗ್ರಾಮಗಳಿಗೆ ತೆರಳಿದ್ದಾರೆ, ಈಗ ಯಾವ ಕೆಲಸಗಳು ಆಗಿವೆ, ಮುಂದೆ ಏನೆಲ್ಲ ಆಗಬೇಕು, ಪರಿಹಾರ ವಿತರಣೆಗೆ ತೆಗೆದುಕೊಂಡಿರುವ ಕ್ರಮಗಳು, ನಷ್ಟದ ಅಂದಾಜು ಮೊದಲಾದ ಮಾಹಿತಿಯನ್ನು ಮುಖ್ಯಮಂತ್ರಿಗೆ ಅಧಿಕಾರಿಗಳು ನೀಡಿದರು ಎನ್ನಲಾಗಿದೆ.