ಈಗಾಗಲೇ ಸಿ.ಎಂ. ಆಪ್ತರು ಅರಸ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಯಾವುದಾದರೂ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಕೊಡುವ ಭರವಸೆ ಕೊಟ್ಟಿದ್ದಾರೆ. ಆದರೆ, ಅದಕ್ಕೆ ಅರಸ್ ಅವರು ಸೊಪ್ಪು ಹಾಕಿಲ್ಲ. ನಾಮಪತ್ರ ವಾಪಸ್ ಪಡೆಯುವ ದಿನಾಂಕದೊಳಗೆ ಸ್ವತಃ ಸಿ.ಎಂ. ಕ್ಷೇತ್ರಕ್ಕೆ ಬಂದು ಅರಸ್ ಅವರ ಮನವೊಲಿಸಲಿದ್ದಾರೆ. ಈ ವಿಷಯವನ್ನು ಅರಸ್ ಅವರೇ ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.