ಬೆಂಗಳೂರು: ಸಹಕಾರ ಬ್ಯಾಂಕ್ಗಳಿಂದ ಸಾಲ ಪಡೆದಿರುವ ₹2.20 ಲಕ್ಷ ರೈತರು ಮಾಹಿತಿ ನೀಡಿದ್ದು, ಈ ತಿಂಗಳ ಕೊನೆಗೆ ಅವರಿಗೆ ಋಣ ಮುಕ್ತ ಪತ್ರ ನೀಡುತ್ತೇವೆ ಎಂದು ಸಹಕಾರ ಸಚಿವಬಂಡೆಪ್ಪ ಕಾಶೆಂಪುರತಿಳಿಸಿದರು.
ಹೀಗೆ ಹಕ್ಕು ಮಂಡಿಸಿರುವ ರೈತರ ಸಾಲದಒಟ್ಟು ಮೊತ್ತ ₹1,050ಕೋಟಿ ಆಗುತ್ತದೆ ಎಂದು ಹೇಳಿದರು.
ಬಡವರ ಬಂಧು ಕಿರು ಕಾಲ ಸಾಲ ಯೋಜನೆಗೆ ಇದೇ 22ರಂದು ಚಾಲನೆ ನೀಡಲಾಗುವುದು. ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಈ ಯೋಜನೆ 50 ಸಾವಿರ ವ್ಯಾಪಾರಿಗಳಿಗೆ ಪ್ರಯೋಜನವಾಗಲಿದೆ ಎಂದು ವಿವರಿಸಿದರು.