‘ಕತ್ತಿ’ಗೆ ಗಾಳ ಹಾಕಿಲ್ಲ:ಶಾಸಕ ಉಮೇಶ ಕತ್ತಿ ಅವರನ್ನು ಸೆಳೆಯಲು ನೀವು ಪ್ರಯತ್ನಿಸಿದ್ದೀರಿ ಎನ್ನಲಾಗುತ್ತಿದೆ ಎಂದು ಸುದ್ದಿಗಾರರು ಕೇಳಿದಾಗ ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ,‘ಶಾಸಕರ ಭವನದಲ್ಲಿ ಶಾಸಕ ಉಮೇಶ ಕತ್ತಿ ಮತ್ತು ನನ್ನದು ಅಕ್ಕಪಕ್ಕದ ಕೊಠಡಿ. ಅವರು ನನ್ನನ್ನು ಕರೆದು,ಎಂಟು ಸಲ ಆರಿಸಿ ಬಂದರೂ ತನಗೆ ಅನ್ಯಾಯವಾಗಿದೆ. ಹಾಗಾಗಿರಾಜೀನಾಮೆ ಕೊಟ್ಟು ಮನೆಗೆ ಹೋಗುವುದಾಗಿ ಹೇಳಿದರು. ಅದಕ್ಕೆ ನಾನು, ಯಾವ ಮನೆ ಕಡೆಗೆ ಹುಕ್ಕೇರಿಗಾ ಅಥವಾ ಜನತಾ ಪರಿವಾರಕ್ಕಾ ಎಂದುಕೇಳಿದೆ. ಅದಕ್ಕೆ ಕತ್ತಿ ನಗುತ್ತಾ, ಜನತಾ ಪರಿವಾರವೇಚೆನ್ನಾಗಿತ್ತು ಎಂದರು. ನಾನು ಅವರಿಗೆರಾಜೀನಾಮೆ ಕೊಡಬೇಡಿ, ಕಾಲ ಬದಲಾಗ್ತದೆ, ನೋಡೋಣ ಎಂದುಹೇಳಿದ್ದೇನೆ’ ಎಂದು ಸ್ಪಷ್ಟನೆ ನೀಡಿದರು.