ಗಸ್ತು ದೋಣಿ‘ಸಿ–420’ಯಲ್ಲಿ ಕಾರವಾರದಿಂದ ಹೊರಟ ತಟರಕ್ಷಕ ದಳದ ಸಿಬ್ಬಂದಿ, ಕೂಡಲೇ ಕಾರ್ಯಾಚರಣೆ ನಡೆಸಿದರು. ಮೀನುಗಾರರನ್ನು ರಕ್ಷಿಸಿ, ಅವರಿಗೆ ಆಹಾರ ನೀಡಿದರು. ಜೊತೆಗೇ ತಾಂತ್ರಿಕ ನೆರವು ನೀಡಿ ಮೀನುಗಾರಿಕಾ ದೋಣಿಯ ಎಂಜಿನ್ ಚಾಲನೆ ಮಾಡಲು ಸಹಕರಿಸಿದರು.ಬಳಿಕ ಮೀನುಗಾರಿಕಾ ದೋಣಿಯು ಕೇರಳದ ಕೊಚ್ಚಿಯತ್ತ ಪ್ರಯಾಣ ಬೆಳೆಸಿತು.