ಬೆಂಗಳೂರು: ‘ತಾವೊಬ್ಬ ಸಭ್ಯ, ಸುಸಂಸ್ಕೃತ ಎಂದು ಬಿಂಬಿಸಿಕೊಳ್ಳುವ ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್, ನಮ್ಮ ಪಕ್ಷದ ಅಭ್ಯರ್ಥಿಗಳ ವಿರುದ್ಧ ಕೀಳು ಭಾಷೆ ಬಳಸುತ್ತಿದ್ದಾರೆ’ ಎಂದು ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಕಾಗವಾಡ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿ ಶ್ರೀಮಂತಪಾಟೀಲ ವಿರುದ್ಧ ಮಾತನಾಡುತ್ತಾ, ‘ಆತ ಒಬ್ಬ ತಾಯಿಗಂಡ ಆತನಿಂದ ಪಾಠ ಕಲಿಯಬೇಕಾಗಿಲ್ಲ ಎಂದಿದ್ದಾರೆ. ಇದು ಎಂತಹ ಸಂಸ್ಕಾರ’ ಎಂದು ಬಿಜೆಪಿ ಪ್ರಶ್ನಿಸಿದೆ.
‘15 ಅಭ್ಯರ್ಥಿಗಳು ಅನರ್ಹರು, ನಾಲಾಯಕ್ಗಳಾಗಿದ್ದು ಇವರನ್ನು ಪಾದರಕ್ಷೆ ಇಡುವ ಸ್ಥಳದಲ್ಲಿಡಲು ಯೋಗ್ಯರು ಎಂದು ಮೂದಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ವಿರುದ್ಧ ಕ್ರಮತೆಗೆದುಕೊಳ್ಳಬೇಕು’ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ ಮುಖ್ಯ ಚುನಾವಣಾಧಿಕಾರಿಯನ್ನು ಒತ್ತಾಯಿಸಿದ್ದಾರೆ.