ಎಡೆಯೂರು ಸಿದ್ಧಲಿಂಗೇಶ್ವರ ದೇವಾಲಯದಲ್ಲಿ ಅಧೀಕ್ಷಕರಾಗಿದ್ದ ಬಸವರಾಜು ಅವರನ್ನು ಹಿಂದಿನ ಸರ್ಕಾರ ಮಹದೇಶ್ವರ ದೇವಾಲಯ ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾಯಿಸಿತು. ಆನಂತರ ಅವರನ್ನು ಉಪ ಕಾರ್ಯದರ್ಶಿ ಆಗಿ ನೇಮಿಸಲಾಯಿತು. ಇದು ಹಿರಿಯ ಕೆಎಎಸ್ ಅಧಿಕಾರಿ ಶ್ರೇಣಿಯ ಹುದ್ದೆಯಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.