ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್‌ಗೆ ಕಲ್ಲೇಟು

Last Updated 7 ಮೇ 2018, 19:53 IST
ಅಕ್ಷರ ಗಾತ್ರ

ಮುದಗಲ್‌ (ರಾಯಚೂರು): ಚುನಾವಣೆ ಪ್ರಚಾರಕ್ಕಾಗಿ ಬಂದಿದ್ದ ಲಿಂಗಸುಗೂರು ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್‌ ಅವರಿಗೆ ಮುದಗಲ್‌ ಪಟ್ಟಣದ ಮೇಗಳಪೇಟೆಯ ಜ್ಞಾನೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಅಪರಿಚಿತರೊಬ್ಬರು ಕಲ್ಲು ತೂರಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಚಿತ್ರನಟ ಯಶ್‌ ಅವರೊಂದಿಗೆ ಪಟ್ಟಣದಲ್ಲಿ ರೋಡ್‌ ಶೋ ಪೂರ್ಣಗೊಳಿಸಿದ ಮಾನಪ್ಪ ಅವರು, ಮೇಗಳಪೇಟೆಯಲ್ಲಿ ಮನೆಮನೆಗೆ ಹೋಗಿ ಮತಯಾಚಿಸಿದರು. ಆನಂತರ ಕಾರಿನತ್ತ ವಾಪಸ್‌ ಬರುತ್ತಿದ್ದಾಗ ಹಿಂಭಾಗಕ್ಕೆ ಕಲ್ಲೇಟು ಬಿದ್ದು ಗಾಯಗೊಂಡಿದ್ದಾರೆ ಎಂದು ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾರೆ.

ಪೊಲೀಸರು ಈ ಬಗ್ಗೆ ಯಾವುದೇ ದೂರು ದಾಖಲಿಸಿಕೊಂಡಿಲ್ಲ. ಕಲ್ಲೇಟು ಬಿದ್ದಿರುವುದನ್ನು ಬೆಂಬಲಿಗರು ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT