ಬೆಂಗಳೂರು: ‘ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಜಗಳದಿಂದ ಯಡಿಯೂರಪ್ಪ ಮಾಡಿರುವ ಭ್ರಷ್ಟಾಚಾರದ ಮಾಹಿತಿಯನ್ನೊಳಗೊಂಡ ಡೈರಿ ಹೊರಬಿದ್ದಿದ್ದು, ಆ ಡೈರಿಯನ್ನು ಈಶ್ವರಪ್ಪ ಆಪ್ತ ಸಹಾಯಕ (ಪಿಎ) ಪೊಲೀಸರಿಗೆ ನೀಡಿದ್ದಾರೆ. ಈ ಡೈರಿಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದರು.