‘ಬಿಜೆಪಿ ವಿರುದ್ಧ ಸೈದ್ಧಾಂತಿಕ ಹೋರಾಟವೇ ನಡೆಯಲಿಲ್ಲ. ದೇಶದಾದ್ಯಂತ ಎಲ್ಲರೂ ಸ್ವಾರ್ಥಕ್ಕಾಗಿ ಹೋರಾಡಿದರು. ಮೈಸೂರು, ತುಮಕೂರು, ಮಂಡ್ಯದಲ್ಲಿ ಯಾರು ಸೋತರೆ, ಯಾರಿಗೆ ಹೆಚ್ಚು ಖುಷಿ ಸಿಗಲಿದೆ ಎಂಬುದೇ ಮುಖ್ಯವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರು ಕೂಡ ಎಡದಿಂದ ಬಲಕ್ಕೆ ವಾಲಿದರು. ಸಿದ್ಧಾಂತವಾದಿಗಳಾದ ಕಮ್ಯುನಿಸ್ಟರನ್ನೇ ಬಗ್ಗಿಸಿಕೊಂಡ ಮೇಲೆ ಉಳಿದವರು ಲೆಕ್ಕಕ್ಕಿಲ್ಲ. ಹೆಬ್ಬಾವಿನಂತೆ ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ನುಂಗುತ್ತಿದೆ. ಮುಂದಿನ ದಿನಗಳಲ್ಲಿ ಕಮ್ಯುನಿಸ್ಟರ ನೆಲೆಗಳಾದ ಪಶ್ಚಿಮ ಬಂಗಾಳ, ಕೇರಳದಲ್ಲೂ ಮುಂಚೂಣಿಗೆ ಬರಲಿದೆ’ ಎಂದು ತಿಳಿಸಿದರು.