ಕರ್ನಾಟಕ ಪ್ರಜಾಕೀಯ ಪಕ್ಷದಿಂದ ಆರ್.ಶಂಕರ್ ಆಯ್ಕೆಯಾಗಿದ್ದು, ಈ ಪಕ್ಷದ ಏಕೈಕ ಶಾಸಕ. ಹಾಗಾಗಿ ಈ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನಗೊಳಿಸುವಂತೆ ಪಕ್ಷದ ವರಿಷ್ಠರು ಷರತ್ತು ವಿಧಿಸಿದ್ದಾರೆ. ಶೀಘ್ರ ವಿಲೀನ ಪ್ರಕ್ರಿಯೆ ನಡೆಯಲಿದ್ದು, ಮತ್ತೆ ಬಂಡಾಯ ತೋರುವುದು, ಇಲ್ಲವೆ ಬಿಜೆಪಿ ಕಡೆಗೆ ಒಲವು ವ್ಯಕ್ತಪಡಿಸುವುದನ್ನು ತಡೆಯುವ ಸಲುವಾಗಿ ವಿಲೀನ ಸೂತ್ರ ರೂಪಿಸಲಾಗಿದೆ. ಈ ಷರತ್ತಿನ ಮೇಲೆ ಸಚಿವ ಸ್ಥಾನ ನೀಡಲಾಗುತ್ತಿದೆಎಂದು ಮೂಲಗಳು ತಿಳಿಸಿವೆ.