ಬೆಂಗಳೂರು: ಎದೆ ನೋವು ಕಾಣಿಸಿಕೊಂಡಿದ್ದರ ಪರಿಣಾಮ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಸೋಮವಾರ ಮಧ್ಯರಾತ್ರಿಬೆಂಗಳೂರಿನ ಅಪೊಲೊಆಸ್ಪತ್ರೆಗೆ ದಾಖಲಿಸಲಾಗಿದೆ.
ನ.10ರ ಮೈಸೂರು ಭೇಟಿ ವೇಳೆ ಶಿವಕುಮಾರ್ವಿವಿಧ ದೇವಾಲಯ ಮತ್ತು ಮಠಗಳಿಗೆ ಭೇಟಿ ನೀಡಿದ್ದರು. ಇದಕ್ಕೂ ಮೊದಲು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಮಟ್ಟದಲ್ಲಿ ವ್ಯತ್ಯಾಸಕಂಡುಬಂದ ಹಿನ್ನೆಲೆಯಲ್ಲಿ ನ.1 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಕ್ರಮ ಹಣ ಗಳಿಕೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ನಿಂದ ಜಾಮೀನು ಪಡೆದ ನಂತರ ಅ. 23 ರಂದು ಶಿವಕುಮಾರ್ ಅವರನ್ನುತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
Karnataka: Congress leader DK Shivakumar admitted to a hospital in Bengaluru last night, after he complained of chest pain. (file pic) pic.twitter.com/RBeKHZSg4e