ವಿಧಾನಸಭೆ, ಲೋಕಸಭೆ ಚುನಾವಣೆ ಸೋಲಿನ ನಂತರ ಆಗಿರುವ ಬೆಳವಣಿಗೆ, ಮೈತ್ರಿ ಸರ್ಕಾರದ ಪತನದಿಂದ ಉಂಟಾಗಿರುವ ಪರಿಣಾಮಗಳು, ಜೆಡಿಎಸ್ ಜತೆಗೆ ಮೈತ್ರಿ ಮುಂದುವರಿಸಬೇಕೆ? ಅನರ್ಹರ ಕ್ಷೇತ್ರಗಳಿಗೆ ಉಪಚುನಾವಣೆ ಎದುರಾದರೆ ಗೆಲುವಿಗೆ ಏನೆಲ್ಲ ತಂತ್ರ ರೂಪಿಸಬೇಕು, ಮುಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳುವ ಕುರಿತು ವರಿಷ್ಠರು ಮಾಹಿತಿ ಕಲೆ ಹಾಕಿದ್ದಾರೆ.