ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ದೇಶದಲ್ಲಿ ಕಾಡುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸರ್ಕಾರದ ಅವೈಜ್ಞಾನಿಕ ನೀತಿಗಳಿಂದಾಗಿ ಆರ್ಥಿಕತೆ ಕುಸಿದಿದ್ದು, ಜಿಡಿಪಿ ಶೇ 6ಕ್ಕಿಂತ ಕಡಿಮೆ ಆಗಿದೆ. ಡಾಲರ್ ಎದುರು ರೂಪಾಯಿ
ಮೌಲ್ಯ ₹72 ದಾಟಿದೆ. ಆಟೊಮೊಬೈಲ್, ಜವಳಿ, ಗಾರ್ಮೆಂಟ್, ಸಿಮೆಂಟ್, ಕಬ್ಬಿಣ ತಯಾರಿಕೆ ಉದ್ಯಮಗಳು ನೆಲ ಕಚ್ಚಿದ್ದು, ಸಣ್ಣ ಕೈಗಾರಿಕೆಗಳು ಅವಸಾನದ ಅಂಚಿಗೆ ತಲುಪಿವೆ. ಇದರಿಂದ ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದು, ನಿರುದ್ಯೋಗ ಪ್ರಮಾಣ ಶೇ 8.1ರಷ್ಟು ಹೆಚ್ಚಾಗಿದೆ ಎಂದು ಆರೋಪಿಸಿದರು.