‘ಆಗ ಒತ್ತರಿಸಿ ಬಂದಿದ್ದ ದುಃಖವನ್ನು ಸಹಿಸುವ ಶಕ್ತಿ ನೀಡಿದವರು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್. ಜೀವನದಲ್ಲಿ ಮುಂದೆ ಬರಬೇಕಾದರೆ ಅಪಾಯಕಾರಿ ಸವಾಲು ಎದುರಿಸಲು ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದರು. ಜನರ ಸೇವೆಯ ಮುಂದೆ ನಾನು ಪಡೆದ ಹುದ್ದೆ ಗೌಣ ಎನಿಸಿತು. ಆಗ ಗಟ್ಟಿ ನಿರ್ಧಾರ ಮಾಡಿ ರಾಜೀನಾಮೆ ಸಲ್ಲಿಸಿದ್ದೆ. ಸೋಮವಾರ ಸ್ಪೀಕರ್ ರಮೇಶಕುಮಾರ್ ಕೈಗೆ ರಾಜೀನಾಮೆ ಪತ್ರ ಸಲ್ಲಿಸುವಾಗಲೂ ಕಣ್ತುಂಬಿ ಬಂದಿತ್ತು. ಆದರೆ ಸ್ಪೀಕರ್ ಅವರ ಮುಖ ಚರ್ಯೆ ನನ್ನ ದುಃಖ ತಡೆಯಿತು’ ಎಂದರು.