ಅವಾಗಲೇ ಅವರು, ಎಲಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ವೆಂಕಟಾಚಲ ಹಾಗೂ ಸದಸ್ಯರಾಗಿದ್ದ ಆಂಜನಪ್ಪ ಅವರನ್ನು ಸಂಪರ್ಕಿಸಿದ್ದರು. ‘ಶಿಫಾರಸು ಪತ್ರ ನೀಡಬೇಕಾದರೆ ₹60 ಸಾವಿರ ಲಂಚ ನೀಡಬೇಕು’ ಎಂದು ಅವರಿಬ್ಬರು ಬೇಡಿಕೆ ಇಟ್ಟಿದ್ದರು. ಅದರಿಂದ ಬೇಸತ್ತು, ವೆಂಕಟಾಚಲ ಹಾಗೂ ಆಂಜನಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ಜುಲೈ 30ರಂದು ದೂರು ನೀಡಿದ್ದರು.