ಗೋಕಾಕದ ಠೇವಣಿದಾರ ಸತ್ಯಪ್ಪ ಮಾಸ್ತಿಹೊಳಿ ಅವರು ನೀಡಿದ ದೂರಿನ ಅನ್ವಯ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ‘ಸಂಘವು ಹಲವು ವರ್ಷಗಳಿಂದಲೂ ಆರ್ಥಿಕ ವ್ಯವಹಾರ ನಡೆಸುತ್ತಿದೆ. ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿ ₹10 ಕೋಟಿಗೂ ಹೆಚ್ಚು ವಂಚಿಸಿದೆ. ಠೇವಣಿ ಹಣ ಮರಳಿಸುವಂತೆ ಗ್ರಾಹಕರು ಮಾಡಿದ ಮನವಿಗೆ ಸ್ಪಂದಿಸಿಲ್ಲ’ ಎಂದು ಆರೋಪಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಹಣ ವಾಪಸ್ ಕೊಡುವಂತೆ ಆದೇಶಿಸಿತ್ತು. ಆದರೆ, ಸಂಘದವರು ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ, ಆ. 14ರಂದು ಬಂಧನ ವಾರೆಂಟ್ ಹೊರಡಿಸಲಾಗಿತ್ತು.