ಶ್ರೀಶೈಲಕ್ಕೆ ಮಾರ್ಚ್ 25ರಂದು ತೆರಳಲು ಭಕ್ತಾದಿಗಳ ಅನುಕೂಲಕ್ಕೆ 10 ಬಸ್ ಗಳನ್ನು ಮುಂಗಡ ಕಾಯ್ದಿರಿಸಲಾಗಿದೆ. ಈಗ ಅವುಗಳನ್ನು ರದ್ದುಪಡಿಸಲು ಯೋಚಿಸುತ್ತಿದ್ದೇವೆ. ಆ ಬಗ್ಗೆ ಮಾರ್ಗದರ್ಶನ ಪಡೆಯಲು ಶ್ರೀಶೈಲ ದೇವಸ್ಥಾನ ಟ್ರಸ್ಟ್ ನವರನ್ನು ಸಂಪರ್ಕಿಸಿದ್ದು, ಅವರು ಭಾನುವಾರ ಆ ಬಗ್ಗೆ ಸ್ಪಷ್ಟಪಡಿಸುವುದಾಗಿ ಹೇಳಿದ್ದಾರೆ. ಯಾತ್ರೆ ಕೈಗೊಳ್ಳುವ ಬಗ್ಗೆ ನಂತರ ತೀರ್ಮಾನಿಸಲಾಗುವುದು ಎಂದು ಯಾತ್ರಾ ಸಮಿತಿ ಮುಖಂಡ ಮಹೇಶ ಕಮತಗಿ ತಿಳಿಸಿದರು.