ಸದ್ಯ, ಎರಡನೇ ಹಂತದಲ್ಲಿರುವ ಈ ಸೋಂಕು ವಿದೇಶ ಪ್ರಯಾಣ ಮಾಡಿ ಬಂದವರು, ಅವರ ಕುಟುಂಬದ ಸದಸ್ಯರು ಹಾಗೂ ನೇರವಾಗಿ ಸಂಪರ್ಕ ಹೊಂದಿದ್ದವರಿಗೆ ಮಾತ್ರ ಕಾಣಿಸಿಕೊಳ್ಳುತ್ತಿದೆ.ಮೈಸೂರು ಜಿಲ್ಲೆಯ 35 ವರ್ಷದ ವ್ಯಕ್ತಿ ಇದಕ್ಕೆ ಹೊರತಾಗಿದ್ದಾರೆ.ನಂಜನಗೂಡಿನ ಔಷಧ ಉತ್ಪಾದನಾ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಅವರು, ಹಲವು ವೈದ್ಯಕೀಯ ತಜ್ಞರೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ ಎನ್ನುವುದು ಪರಿಶೀಲನೆಯಲ್ಲಿ ಗೊತ್ತಾಗಿದೆ. ಸಂಪರ್ಕಕ್ಕೆ ಬಂದ ಏಳು ಮಂದಿಯನ್ನು ಮನೆಯಲ್ಲಿ ನಿಗಾ ಇರಿಸಲಾಗಿದೆ.