ಟ್ರಾವೆಲ್ ಹಿಸ್ಟರಿ: ದುಬೈನಿಂದ ಈ ವ್ಯಕ್ತಿ ಇದೇ 15ರಂದು ಇಂಡಿಗೊ ವಿಮಾನದಲ್ಲಿ ಬೆಂಗಳೂರಿಗೆ ಬಂದು ಅಲ್ಲಿಂದ ಮಡಿಕೇರಿಯ ಮೂರ್ನಾಡಿಗೆ 16ರ ಬೆಳಿಗ್ಗೆ ಮೈಸೂರು ಮಾರ್ಗವಾಗಿ ರಾಜಹಂಸ ಬಸ್ ನಲ್ಲಿ ಬಂದಿದ್ದಾರೆ. ಬೆಂಗಳೂರಿನ ಸೆಟಲೈಟ್ ಬಸ್ ನಿಲ್ದಾಣದಿಂದ ಬಸ್ ಏರಿದ್ದಾರೆ.ಸಂಚಾರ ಮಾಡಿದ ರಾಜಹಂಸ ಬಸ್ ಪತ್ತೆ ಮಾಡಲಾಗಿದೆ. ಆ ಬಸ್ ಅನ್ನು ವಾಶ್ ಮಾಡಿಸಲಾಗಿದೆ. ಆ ಬಸ್ನಲ್ಲಿ ಬಂದವರಿಗೆ ರೋಗ ಲಕ್ಷಣ ಕಂಡುಬಂದರೆ ಮಾಹಿತಿ ನೀಡುವಂತೆ ಕೋರಲಾಗಿದೆ. ಮಾರ್ಗ ಮಧ್ಯದಲ್ಲಿ ಹೋಟೆಲ್ನಲ್ಲಿ ಈ ವ್ಯಕ್ತಿ ಊಟ ಸಹ ಮಾಡಿದ್ದಾರೆ.