ಮದುವೆ, ಜಾತ್ರೆಗೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರದಂತೆ ಮನವೊಲಿಸುವ ಕೆಲಸ ಸರ್ಕಾರ ಕಡೆಯಿಂದ ನಡೆದಿದೆ. ಮಾಲ್, ಚಿತ್ರಮಂದಿರ, ಕ್ಲಬ್, ಪಬ್ಗಳು ಬಂದ್ ಆಗಿರುವುದರಿಂದ ವ್ಯಾಪಾರ, ವಹಿವಾಟಿನ ಮೇಲೆ ತೀವ್ರ ಹೊಡೆತ ಬಿದ್ದಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಬೇರೆ ಬೇರೆ ಜಿಲ್ಲೆಯವರು ರಾಜಧಾನಿ ತೊರೆಯಲು ಮುಂದಾಗಿದ್ದರಿಂದಾಗಿ, ಹೊರ ಊರುಗಳಿಗೆ ಹೋಗಲಿರುವ ಬಸ್, ರೈಲುಗಳು ತುಂಬಿ ತುಳುಕಿದ ಸ್ಥಿತಿ ಶನಿವಾರ ಸೃಷ್ಟಿಯಾಗಿತ್ತು. ಹೊರರಾಜ್ಯಗಳಿಗೆ ಹೋಗುವ 92 ಐಷಾರಾಮಿ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.