ಬೆಂಗಳೂರು: ದೇಶದ ಪ್ರತಿಷ್ಠಿತ ದ್ವಿಚಕ್ರ, ತ್ರಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್ ಮೋಟರ್ಸ್, ‘ಪಿಎಂ ಕೇರ್ಸ್’ ಪರಿಹಾರ ನಿಧಿಗೆ ₹25 ಕೋಟಿ ದೇಣಿಗೆ ನೀಡಿದೆ.
ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿಯ ಘಟಕವಾದ ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ ಮೂಲಕ ಈ ದೇಣಿಗೆ ನೀಡಲಾಗಿದೆ ಕಂಪನಿಯ ಮುಖ್ಯಸ್ಥ ವೇಣು ಶ್ರೀನಿವಾಸನ್ ಹೇಳಿದ್ದಾರೆ.
ತುರ್ತು ಸೇವೆ ಒದಗಿಸುವ ಸಿಬ್ಬಂದಿಗೆ ಈಗಾಗಲೇ 10 ಲಕ್ಷ ಸುರಕ್ಷಿತ ಮುಖಗವಸು, ನಗರಪಾಲಿಕೆಗಳನ್ನು ಸೋಂಕು ಮುಕ್ತಗೊಳಿಸಲು ವಾಹನಗಳ ಒದಗಿಸುವಿಕೆ, ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಕಂಪನಿಯು ನೆರವು ನೀಡಿದೆ ಎಂದು ಅವರು ತಿಳಿಸಿದ್ದಾರೆ.