ದುಲ್ಕರ್ ಸಲ್ಮಾನ್ ಮತ್ತು ಅನುಷ್ಕಾ ಶೆಟ್ಟಿ ಅವರಿಗಾಗಿ ಒಂದು ವಿಶಿಷ್ಟ ಸನ್ನಿವೇಶವನ್ನು ಚಿತ್ರಕತೆಯಲ್ಲಿ ಅಳವಡಿಸಲಾಗಿದೆ ಎಂದು ಹೇಳಲಾಗಿದೆ. ವಿಜಯ್ ದೇವರಕೊಂಡ, ಸಮಂತಾ, ಪ್ರಕಾಶ್ ರಾಜ್ ಮತ್ತು ಶಾಲಿನಿ ದೇಶಪಾಂಡೆ ಪ್ರಮುಖ ಪಾತ್ರಗಣದಲ್ಲಿದ್ದು ಅನುಷ್ಕಾ ಪ್ರವೇಶದಿಂದ ‘ಮಹಾನತಿ’ಯ ತಾರಾ ವರ್ಚಸ್ಸು ಇನ್ನಷ್ಟು ಹೆಚ್ಚಲಿದೆ.