‘ನ್ಯಾಯಾಂಗ ವ್ಯವಸ್ಥೆ ಹದಗೆಟ್ಟಿದೆ. ನ್ಯಾಯಾಧೀಶರ ಸಂಖ್ಯೆಯೂ ಕಡಿಮೆ. ಮೂಲ ಸೌಕರ್ಯಗಳೂ ಇಲ್ಲ. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳಲ್ಲಿರುವ ಪ್ರಕರಣಗಳನ್ನು ಬಿಟ್ಟು ಉಳಿದ ನ್ಯಾಯಾಲಯಗಳಲ್ಲಿ 2,76,74,499 ಪ್ರಕರಣಗಳು ವಿವಿಧ ಹಂತಗಳಲ್ಲಿ ಬಾಕಿ ಉಳಿದಿವೆ. ಹೆಚ್ಚಿನ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯೊಬ್ಬರು ಪ್ರಧಾನಿ ಮುಂದೆ ಕಣ್ಣೀರು ಹಾಕಿದರು’ ಎಂದು ಪಾಟೀಲ ಹೇಳಿದರು.