ಬೆಂಗಳೂರು: ಮೇ 3ರ ಸಂಜೆ 5ರಿಂದ ಮೇ 4ರ ಸಂಜೆ 5 ಗಂಟೆ ವರೆಗೆ ರಾಜ್ಯದಾದ್ಯಂತ ಹೊಸದಾಗಿ 37 ಕೋವಿಡ್–19 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 651ಕ್ಕೆ ಏರಿಕೆಯಾಗಿದೆ. ಈ ಪೈಕಿ 27 ಮಂದಿ ಸಾವಿಗೀಡಾಗಿದ್ದು, 321 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಹೊಸದಾಗಿ ಪತ್ತೆಯಾದ ಪ್ರಕರಣಗಳ ಪೈಕಿ ದಾವಣಗೆರೆ ಒಂದರಲ್ಲೇ 22 ಮಂದಿಗೆ ಕೊರೊನಾ ತಗುಲಿದೆ. ಉಳಿದಂತೆ ಚಿಕ್ಕಬಳ್ಳಾಪುರದಲ್ಲಿ 1, ಮಂಡ್ಯದಲ್ಲಿ 2, ಹಾವೇರಿ, ವಿಜಯಪುರದಲ್ಲಿ ತಲಾ 1 ಮತ್ತು ಕಲಬುರಗಿಯಲ್ಲಿ 2, ಬೀದರ್ನಲ್ಲಿ 7, ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ.