ಗುರುವಾರ ಇಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ‘2003ರಲ್ಲಿ ಸಾರ್ಸ್ ಸೋಂಕು ಕಾಣಿಸಿಕೊಂಡಿತ್ತು. ಆಗಲೇ ಅದಕ್ಕೊಂದು ನಿರ್ದಿಷ್ಟ ಲಸಿಕೆ ಹುಡುಕಿದ್ದರೆ ಕೊರೊನಾ ಇಷ್ಟು ಮೆರೆಯಲು ಸಾಧ್ಯವೇ ಇರಲಿಲ್ಲ. ಆದರೆ ಇದು ಯಾರಿಗೂ ಬೇಡವಾಗಿತ್ತು. ಈಗಲೂ ಅಷ್ಟೇ, ಜಗತ್ತಿನ ಶ್ರೀಮಂತ ರಾಷ್ಟ್ರಗಳೂ ಯುದ್ಧ ಸಿದ್ಧತೆಗೆ ತೆಗೆದಿರಿಸುವ ಹಣವನ್ನು ವೈದ್ಯಕೀಯ ಸಂಶೋಧನೆಗೆ ನೀಡುತ್ತಿಲ್ಲ’ ಎಂದರು.