ಪೋಷಕರೊಬ್ಬರು ನೀಡಿದ ದೂರಿನಲ್ಲಿ, 'ಬನಶಂಕರಿಯ ಸಿಬಿಎಸ್ಇ ಶಾಲೆಯೊಂದರಲ್ಲಿ ನಮ್ಮ ಮಗು ಓದುತ್ತಿದೆ. ಈ ಸಂದರ್ಭದಲ್ಲಿ ಯಾವುದೇ ಶಾಲೆಗಳು 2020-21ರ ಅವಧಿಯ ಶುಲ್ಕವನ್ನು ಸಂಗ್ರಹಿಸುವಂತಿಲ್ಲ ಎಂದು ಮಾಧ್ಯಮಗಳ ಮೂಲಕ ನಮಗೆ ತಿಳಿಯಿತು. ಆದರೆ, ಏ.15ರ ಒಳಗೆ ಶುಲ್ಕ ಭರಿಸಬೇಕೆಂದು ಶಾಲೆಯಿಂದ ನಮಗೆ ಸಂದೇಶ ಮತ್ತು ಇ-ಮೇಲ್ಗಳು ಬರುತ್ತಿವೆ. ದಯಮಾಡಿ ಈ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿ' ಎಂದು ಸಚಿವ ಸುರೇಶ್ ಕುಮಾರ್ ಅವರನ್ನು ಕೋರಲಾಗಿದೆ.