ಕೈ ಹಿಡಿದ ಅದೃಷ್ಟ: ಪ್ರಣತಿ ನಾಯಕ್ ಅವರಿಗೆ ಇಲ್ಲಿ ಅದೃಷ್ಟ ಕೈ ಹಿಡಿದಿತ್ತು. ಅರ್ಹತಾ ಸುತ್ತಿನ ಮುಕ್ತಾಯಕ್ಕೆ ಅವರು ಒಂಬತ್ತನೆಯವರಾಗಿದ್ದರು. ಆದರೆ ಮೊದಲ ಮೂರು ಸ್ಥಾನಗಳು ಕೆನಡಾ ಪಾಲಾದ ಕಾರಣ ಪ್ರಣತಿಗೆ ಫೈನಲ್ ಸುತ್ತಿನಲ್ಲಿ ಸ್ಪರ್ಧಿಸಲು ಅವಕಾಶ ಲಭಿಸಿತು. ನಿಯಮಗಳ ಪ್ರಕಾರ ಒಂದು ದೇಶದಿಂದ ಇಬ್ಬರಿಗೆ ಮಾತ್ರ ಫೈನಲ್ ಪ್ರವೇಶಿಸಲು ಅವಕಾಶ ಇರುವುದರಿಂದ ಭಾರತದ ಜಿಮ್ನಾಸ್ಟ್ಗೆ ಅಕವಾಶದ ಬಾಗಿಲು ತೆರೆಯಿತು.