ಈ ಹಣಕ್ಕೆ ದಾಖಲೆಗಳು ಇರಲಿಲ್ಲ ಎನ್ನಲಾಗಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಣದ ಮೂಲ ಕುರಿತು ಜಸ್ವಂತ್ ಸಿಂಗ್, ಹಣ ಸಾಗಿಸುತ್ತಿದ್ದ ಪ್ರಕಾಶ್ ಹಾಗೂ ಗಣೇಶ್ ಎಂಬುವವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ರೈಲಿನಲ್ಲಿ ಹಿಂದೆ ಹಣ ಸಾಗಿಸಲಾಗುತ್ತಿತ್ತೆ ಹಾಗೂ ಹಣ ಸಾಗಣೆ ಜಾಲ ಎಲ್ಲಿಯವರೆಗೆ ವಿಸ್ತರಣೆಯಾಗಿದೆ ಎಂಬ ಕುರಿತು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.