‘10ರಿಂದ 12 ವರ್ಷಗಳ ಆನೆ ಇದಾಗಿದ್ದು, ತನ್ನ ಗುಂಪಿನೊಂದಿಗೆ ಅಣೆಕಟ್ಟೆಯ ಹಿನ್ನೀರು ಕುಡಿಯಲು ಬಂದಿತ್ತು. ಪ್ರಖರವಾದ ಬಿಸಿಲಿನಿಂದಾಗಿನೀರಿನ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿಆನೆಯು ಕೆಸರಿನಲ್ಲಿ ಸ್ವಲ್ಪ ದೂರ ಹೆಜ್ಜೆ ಹಾಕಿನೀರು ಕುಡಿಯುತ್ತಿತ್ತು. ಆಗ ನಾಲ್ಕೈದು ಮೊಸಳೆಗಳು ಏಕಾಏಕಿ ದಾಳಿ ಮಾಡಿದವು. ಆನೆಯ ಕಾಲುಗಳು ಕೆಸರಿನಲ್ಲಿ ಸಿಲುಕಿದ್ದ ಕಾರಣ ಅದಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ದಾಂಡೇಲಿ ವನ್ಯಜೀವಿ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಗೊರವರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.